Dr. K. N. Ganeshaiah
Publisher - ಅಂಕಿತ ಪುಸ್ತಕ
- Free Shipping Above ₹200
- Cash on Delivery (COD) Available
Pages - 248
Type - Paperback
ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾನ ಗಳಿಸಿಕೊಂಡಿರುವ ಡಾ। ಕೆ.ಎನ್. ಗಣೇಶಯ್ಯನವರು ಬರೆಯಲಾರಂಭಿಸಿದ್ದು ತೀರಾ ಈಚೆಗೆ. ಕಳೆದ 3 ವರ್ಷಗಳಲ್ಲಿ ನಾಲ್ಕು ಕಾದಂಬರಿ ಮತ್ತು ಮೂರು ಕಥಾ ಸಂಕಲನ ರಚಿಸಿದ್ದಾರೆ.
'ಚಿತಾದಂತ', ಇತಿಹಾಸದ ಎಳೆಯನ್ನು ಹಿಡಿದು ಬರೆದ ರೋಚಕ ಕಾದಂಬರಿ. ಕ್ರಿಸ್ತಪೂರ್ವದಿಂದ ಹಿಡಿದು ಆಧುನಿಕ ಕಾಲದವರೆಗೆ ಅದರ ವ್ಯಾಪ್ತಿ ಹರಡಿದೆ. ದಿಗ್ಬ್ರಮೆ ಉಂಟು ಮಾಡುವ ಈ ಕಥಾನಕಕ್ಕೆ ಪೂರಕವಾಗಿ ಅವರು ನೀಡುವ ಉಲ್ಲೇಖಗಳು, ನಕ್ಷೆಗಳು, ಚಿತ್ರಗಳು – ಇದು ನೈಜ ಕಥೆಯೇ ಎಂಬಂತೆ ಭಾಸವಾಗುತ್ತದೆ. ಈ ಮೂಲಕ ಗಣೇಶಯ್ಯನವರು ಇತಿಹಾಸವನ್ನು ಹೊಸ ದಿಕ್ಕಿನಲ್ಲಿ ನೋಡುವಂತೆ ಪ್ರೇರೇಪಿಸುತ್ತಾರೆ. ಅನೇಕ ಐತಿಹಾಸಿಕ ಮಿಥ್ಗಳನ್ನು ಒಡೆಯುವಲ್ಲಿ ಈ ಕಥಾನಕ ಯಶಸ್ವಿಯಾಗಿದೆ. ಕಥೆ ಮುಂದೇನು? ಮುಂದೇನು? ಎಂದು ಕುತೂಹಲ ಹುಟ್ಟಿಸುತ್ತದೆ. ಕಥಾವಸ್ತುವನ್ನು 'ಇದು ಹೀಗೇ' ಎಂದು ಓದುಗರು ಊಹಿಸಲು ಸಾಧ್ಯವೇ ಇಲ್ಲದಂತೆ ಗಣೇಶಯ್ಯ ನವರು ಕಾದಂಬರಿ ರಚಿಸಿದ್ದಾರೆ.